M.net4.jpeg
  • ಕವರ್ ಸ್ಟೋರಿ

  • ಸ್ಟೇಟ್ ನ್ಯೂಸ್

  • ದೇಶ - ವಿದೇಶ

  • ಸಿಟಿಜನ್ ರಿಪೋರ್ಟರ್

  • ಅಂಕಣಗಳು

  • ಕಥನ ಕುತೂಹಲ

  • More

    • Facebook Social Icon
    • Twitter Social Icon
    • Google+ Social Icon
    • YouTube Social  Icon
    • Pinterest Social Icon
    • Instagram Social Icon
    RSS Feed
    ದೇಶ

    ಬಿಜೆಪಿ ಹೇಳುವ 'ಉದ್ದೇಶಪೂರ್ವಕ ಸುಳ್ಳು'ಗಳು

    February 21, 2018

    ಮೋದಿ, ಶಾ ಮಾತ್ರವಲ್ಲ, ಇಂಥ ಸುಳ್ಳುಗಳನ್ನು ಹರಿಬಿಡುವುದು ಬಿಜೆಪಿಯವರಿಗೊಂದು ಖಯಾಲಿಯೇ ಆಗಿಹೋಗಿದೆ. ಪೆಟ್ಟು ತಿನ್ನುವ ಪ್ರತಿಯೊಬ್ಬ ಹಿಂದೂ ಹೆಸರಿನ ವ್ಯಕ್ತಿ 'ಬಿಜೆಪಿ ಕಾರ್ಯಕರ್ತ'ನಾಗುವುದು ಪಕ್ಷದ ಮತ್ತೊಂದು ಮಹಾನಾಟಕ. ಅದೇ ವೇಳೆಗೆ, ನಿಜವಾಗಿಯೂ ಬಿಜೆಪಿಯವರೇ ಆಗಿದ್ದು, ಬಿಜೆಪಿ/ ಹಿಂದುತ್ವವಾದಿ ಸಂಘಟನೆಗಳಿಂದ ಕೊಲೆಯಾಗಿಹೋದವರ ಬಗ್ಗೆ ಇವರ ಮಾತಿಲ್ಲ ಇದಕ್ಕೆ ಕಾರಣ ಬಹಳ ಸರಳ. ಈ ಮಂದಿಗೆ ಸುಳ್ಳು ಹೇಳಿ ಅಭ್ಯಾಸವೇ ಹೊರತು ಸತ್ಯ ಅಪಥ್ಯ. 

     

    ‘ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ’ ಎಂದು ನೆನ್ನೆ (ಫೆ.20) ಮಧ್ಯಾಹ್ನ ಮಂಗಳೂರಿನ ಬಿ.ಸಿ.ರೋಡ್‌ ಭಾಷಣದಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು, ತಾನು ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿದ್ದೆಂದು ತಿಪ್ಪೆ ಸಾರಿಸಿದ ಘಟನೆ ನಡೆದಿದೆ. 

    ಅಮಿತ್ ಶಾ ಹೇಳಿದ ಈ 'ಉದ್ದೇಶಪೂರ್ವಕ ಸುಳ್ಳು' ಪ್ರಕರಣ ಭಕ್ತರ ಕುರುಡನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸಬಹುದು ಎಂಬ ನಿರೀಕ್ಷೆ ಇದೆ. 

     

    ಹಾಗೆ ನೋಡಿದರೆ, ಬಿಜೆಪಿಗಾಗಲೀ ಅಮಿತ್ ಶಾಗಾಗಲೀ 'ಉದ್ದೇಶಪೂರ್ವಕ'ವಾಗಿ ಸುಳ್ಳು ಹೇಳುವುದು ಹೊಸತಲ್ಲ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ವಿದೇಶಗಳಲ್ಲಿರುವ ಕಪ್ಪುಹಣ ಮೊಗೆದು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಜಮೆ ಮಾಡುವ ("ಯೂಂ ಹಿ ಮುಫತ್ ಮೆ ದಸ್ ಪಂದ್ರಾಹ್ ಲಾಕ್ ಭರ್'ದೇಂಗೆ) ಅಂದಿದ್ದರು ನರೇಂದ್ರ ಮೋದಿ. ಮುಂದೆ ಅದನ್ನು ಅಮಿತ್ ಶಾ ಬಹಿರಂಗವಾಗಿಯೇ ತಳ್ಳಿ ಹಾಕಿ, "ಅದೊಂದು ಜುಮ್ಲಾ" ಅಂತ ಹೆಳುವ ಮೂಲಕ ಮೋದಿಯ ಸುಳ್ಳನ್ನು ಸಮರ್ಥಿಸಿಕೊಂಡಿದ್ದರು. 

     

     ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ - ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಿಂತು ಹೇಳುವ ಸುಳ್ಳುಗಳಂತೂ ಮತ್ತಷ್ಟು ನಗೆಪಾಟಲಿನದು. ಇತ್ತೀಚೆಗೆ ಪರಿವರ್ತನಾ ರ್ಯಾಲಿಯಲ್ಲಿ ಮೋದಿ "ಎರಡು ಲಕ್ಷ ಕೋಟಿಗೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟಿದ್ದೀನಿ" ಎಂದು ಭಾಷಣ ಬಿಗಿದು ಚಪ್ಪಾಳೆ ತಟ್ಟಿಸಿಕೊಂಡಿದ್ದರು. ಇದು ಮತ್ತೊಂದು "ಉದ್ದೇಶಪೂರ್ವಕ ಸುಳ್ಳು". ಬಹುಶಃ ಮತಗಳು ಬಂದು ಬೀಳಲೆಂಬ ಉದ್ದೇಶದಿಂದ ಹೇಳಿದ ಸುಳ್ಳು.

    ಬುಲೆಟ್ ಟ್ರೈನ್ ಕಾರ್ಯಾಚರಣೆ ಬಗ್ಗೆ ಮೋದಿ ವಿವರಣೆ ಮತ್ತೊಂದು ಅಂಥದ್ದೇ ಹಸಿ ಸುಳ್ಳು. ಹೇಳುತ್ತಾ ಹೋದರೆ ಈ ಸುಳ್ಳುಗಳ ಪಟ್ಟಿ ಬಾಲದಂತೆ ಬೆಳೆಯುತ್ತದೆ. 

     

    ಮೋದಿ, ಶಾ ಮಾತ್ರವಲ್ಲ, ಇಂಥ ಸುಳ್ಳುಗಳನ್ನು ಹರಿಬಿಡುವುದು ಬಿಜೆಪಿಯವರಿಗೊಂದು ಖಯಾಲಿಯೇ ಆಗಿಹೋಗಿದೆ. ಪೆಟ್ಟು ತಿನ್ನುವ ಪ್ರತಿಯೊಬ್ಬ ಹಿಂದೂ ಹೆಸರಿನ ವ್ಯಕ್ತಿ 'ಬಿಜೆಪಿ ಕಾರ್ಯಕರ್ತ'ನಾಗುವುದು ಪಕ್ಷದ ಮತ್ತೊಂದು ಮಹಾನಾಟಕ. ಅದೇ ವೇಳೆಗೆ, ನಿಜವಾಗಿಯೂ ಬಿಜೆಪಿಯವರೇ ಆಗಿದ್ದು, ಬಿಜೆಪಿ/ ಹಿಂದುತ್ವವಾದಿ ಸಂಘಟನೆಗಳಿಂದ ಕೊಲೆಯಾಗಿಹೋದವರ ಬಗ್ಗೆ ಇವರ ಮಾತಿಲ್ಲ ಇದಕ್ಕೆ ಕಾರಣ ಬಹಳ ಸರಳ. ಈ ಮಂದಿಗೆ ಸುಳ್ಳು ಹೇಳಿ ಅಭ್ಯಾಸವೇ ಹೊರತು ಸತ್ಯ ಅಪಥ್ಯ. 

     

    ಉದಾಹರಣೆಗೆ ನೋಡಿ; ಕಳೆದ ವರ್ಷ ಶೋಭಾ ಕರಂದ್ಲಾಜೆ ವಿವಿಧ ಘಟನೆಗಳಲ್ಲಿ ಮೃತರಾದ 23 ಮಂದಿ ಹಿಂದೂಗಳ ಪಟ್ಟಿಯನ್ನು ಕೇಂದ್ರ ಗೃಹಖಾತೆಗೆ ಸಲ್ಲಿಸಿ ಇವರನ್ನೆಲ್ಲಾ ಮುಸ್ಲಿಮರು ಕೊಂದಿದ್ದಾರೆ ಮತ್ತು ಇವರಿಗೆ ಪಿಎಫ್ಐ ಹಾಗೂ ಎಸ್ ಡಿಪಿಐ ಬೆನ್ನೆಲುಬಾಗಿ ನಿಂತಿದೆ ಎಂದು ಆರೋಪ ಮಾಡಿ ಕೇಂದ್ರ ಗೃಹ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದರು. 

    ವಾಸ್ತವದಲ್ಲಿ ಶೋಭಾ ಕರಂದ್ಲಾಜೆ ಸೂಚಿಸಿದ 23 ಹಿಂದೂ ನಾಯಕರ/ಕಾರ್ಯಕರ್ತರ ಕೊಲೆಗಳಲ್ಲಿ ಅಶೋಕ್ ಪೂಜಾರಿ ಜೀವಂತವಿದ್ದು, ಉಳಿದ 19ರಲ್ಲಿ 11 ಮಂದಿ ಆತ್ಮಹತ್ಯೆ, ಗ್ಯಾಂಗ್ ವಾರ್ ಮೊದಲಾದ ಪ್ರಕರಣಗಳಲ್ಲಿ ಪ್ರಾಣ ತೊರೆದವರಾಗಿದ್ದರು. ಆದರೆ, ನಿಜವಾಗಿಯೂ ಬಿಜೆಪಿ ಕಾರ್ಯಕರ್ತನೇ ಆಗಿದ್ದ ಮತ್ತು ಬಿಜೆಪಿ ವ್ಯಕ್ತಿಯಿಂದಲೇ ಕೊಲೆಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ವಿನಾಯಕ ಬಾಳಿಗರ ಹೆಸರು ಶೋಭಾ ಕಳಿಸಿದ ಪಟ್ಟಿಯಲ್ಲಿ ಇರಲಿಲ್ಲ! 

     

    ಜಿಡಿಪಿ ಹೆಚ್ಚಳ, ಆರ್ಥಿಕ ನೀತಿ, ಕೃಷಿ, ಉದ್ಯೋಗ ಸೃಷ್ಟಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಬಿಜೆಪಿಯದ್ದು ಸುಳ್ಳಿನದ್ದೇ ಸಾಧನೆ. ಲಕ್ಷಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದು ಯುವಜನರನ್ನು ಸೆಳೆದು ವೋಟು ಗಿಟ್ಟಿಸಿ, ನಂತರದಲ್ಲಿ 'ಪಕೋಡ ಮಾರೋದೂ ಉದ್ಯೋಗವೇ' ಎಂದು ಕೈಯಾಡಿಸಿದವರಿಂದ ನಾವು ಇನ್ನೂ ನಿಜಾಯಿತಿಯನ್ನು ನಿರೀಕ್ಷಿಸುತ್ತೇವೆ ಎಂದರೆ, ಅದು ನಮ್ಮದೇ ತಪ್ಪು. ಇಷ್ಟಕ್ಕೂ, ಉದ್ದೇಶಪೂರ್ವಕ ಸುಳ್ಳು ಹೇಳಿದೆವು, ಜುಮ್ಲಾ ಮಾಡಿದೆವು ಎಂದು ರಾಜಾರೋಷವಾಗಿ ಹೇಳಿಕೊಳ್ಳುವವರನ್ನು ದೂರುವುದಾದರೂ ಹೇಗೆ ಸಾಧ್ಯ!?  

     

     

     

     

     

    Tags:

    ಅಮಿತ್ ಶಾ

    ಮೋದಿ

    ಸುಳ್ಳು

    Please reload

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    ಜನ್ಮದಿನ : ಒಂದು ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ

    ರಾಜಕೀಯ ನಿಲುವು ವ್ಯಕ್ತಪಡಿಸಿದ ಯುವತಿಗೆ ಜಾತಿನಿಂದನೆ; ಇದಕ್ಕೆ ಕೊನೆ ಇಲ್ಲವೆ?

    ಬಿಜೆಪಿ ಹೇಳುವ 'ಉದ್ದೇಶಪೂರ್ವಕ ಸುಳ್ಳು'ಗಳು

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    1/10
    Please reload

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    May 5, 2019

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    May 3, 2019

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    May 1, 2019

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    May 1, 2019

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    May 1, 2019

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    March 27, 2019

    ಧರ್ಮ, ರಾಷ್ಟ್ರ ಮತ್ತು ಸಾಮಾಜಿಕ ಕ್ರಾಂತಿ ವಿಷಯಗಳಲ್ಲಿ ಭಗತ್ ಸಿಂಗ್ ಮೇಲೆ ಯಾರ ಚಿಂತನೆಗಳ ಪ್ರಭಾವವಿತ್ತು?

    March 22, 2019

    ಬಾಜಿ : ಆಂಟನ್ ಚೆಕೋವ್ ಕಥೆ, ಪುನೀತ್ ಅಪ್ಪು ಅನುವಾದದಲ್ಲಿ...

    March 22, 2019

    ಕ್ರಾಂತಿ, ಅಧಿಕಾರ ಮತ್ತು ಪ್ರಜಾಪ್ರಭುತ್ವ ಕುರಿತು ಭಗತ್ ಸಿಂಗ್ ಮೇಲೆ ಪ್ರಭಾವ ಬೀರಿದ ಚಿಂತನೆಗಳು ಯಾವುವು ಗೊತ್ತೆ?

    March 20, 2019

    ಅಸ್ಪೃಶ್ಯತೆಯ ಸಮಸ್ಯೆ: ಭಗತ್ ಸಿಂಗನ ‘ವಿದ್ರೋಹಿ’ ಬರಹ : ಭಾಗ ~ 2

    March 19, 2019

    Please reload

    Share