M.net4.jpeg
  • ಕವರ್ ಸ್ಟೋರಿ

  • ಸ್ಟೇಟ್ ನ್ಯೂಸ್

  • ದೇಶ - ವಿದೇಶ

  • ಸಿಟಿಜನ್ ರಿಪೋರ್ಟರ್

  • ಅಂಕಣಗಳು

  • ಕಥನ ಕುತೂಹಲ

  • More

    • Facebook Social Icon
    • Twitter Social Icon
    • Google+ Social Icon
    • YouTube Social  Icon
    • Pinterest Social Icon
    • Instagram Social Icon
    RSS Feed
    ದೇಶ

    ಕುರುಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಸೇನಾ ಜವಾನ

    August 9, 2016

    ಅಷ್ಟಾದರೂ ಶನಿವಾರ ರಾತ್ರಿಯವರೆಗೆ ಆರೋಪಿಯನ್ನು ಬಂಧಿಸಿರಲಿಲ್ಲ. ಪೋಷಕರು ಹಾಗೂ ಸಮುದಾಯದ ಒತ್ತಡ ಮತ್ತು ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಕೊನೆಗೂ ಆರೋಪಿಯ ಬಂಧನವಾಗಿದೆ.  

    ಕಳೆದ 15 ವರ್ಷಗಳಲ್ಲಿ ಇಂಡಿಯಾದಲ್ಲಿ ಅತ್ಯಾಚಾರ ಪ್ರಕರಣಗಳು 15%ರಷ್ಟು ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲಿನ ಅತ್ಯಾಚಾರ ಸಂಖ್ಯೆಗಳು ಅಸಹ್ಯವಾಗಿ ಏರಿಕೆ ಕಂಡಿವೆ. ಈ ಪಟ್ಟಿಗೆ ಇತ್ತೀಚಿನ ಸೇರ್ಪಡೆ, ಆಗಸ್ಟ್ 5ರ ಶುಕ್ರವಾರ ನಡೆದ ದಲಿತ - ಕುರುಡು ಬಾಲಕಿಯ ಮೇಲೆ ಸೇನಾ ಜವಾನನೊಬ್ಬ ನಡೆಸಿದ ಅತ್ಯಾಚಾರ.

    ಮಥುರಾ ಜಿಲ್ಲೆಯ ರಾಮ್ ಕಾ ನಾಗ್ಲಾ ಎಂಬ ಹಳ್ಳಿಗೆ ರಜೆ ನಿಮಿತ್ತ ಬಂದಿದ್ದ ಜಾಟ್ ರೆಜಿಮೆಂಟ್’ಗೆ ಸೇರಿದ ಜವಾನ ಅಜೀತ್ ಸಿಂಗ್ (30ವ) ಈ ದುಷ್ಕೃತ್ಯ ಎಸಗಿದ್ದಾನೆ. ಈತನ ಮೇಲೆ ವಿವಿಧ ಸೆಕ್ಷನ್’ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಮಥುರಾ ಪೊಲೀಸರು, ಬಂಧನದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.

     

    ಕಳೆದ ಶುಕ್ರವಾರ ರಾತ್ರಿ ತನ್ನ ಪರಿಚಿತರಾದ ಬಾಲಕಿಯ ಮನೆಗೆ ತೆರಳಿದ್ದ ಅಜೀತ್ ಸಿಂಗ್, ಕುಡಿದ ಅಮಲಿನಲ್ಲಿದ್ದ ಎಂದು ಹೇಳಲಾಗಿದೆ. ಆಕೆಯ ತಂದೆ ಜರೂರು ಕೆಲಸದ ನಿಮಿತ್ತ ಹೊರಗೆ ಹೋದಾಗ ಈತ ಹುಡುಗಿಯನ್ನು ಚಾವಣಿಗೆ ಕರೆದೊಯ್ದು ಅತ್ಯಾಚಾರ ನಡೆಸಿದನೆಂದು ಬಾಲಕಿ ಮತ್ತು ಪೋಷಕರು ದೂರು ನೀಡಿದ್ದಾರೆ.

    ಪ್ರಕರಣ ನಡೆದಾಗ ಬಾಲಕಿಯ ಕುಟುಂಬದವರು ಸಮೀಪದ ನೌಝೀಲ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದರು. ಆದರೆ ಅಲ್ಲಿಯ ಪೊಲೀಸರು ರೇಪ್ ಕೇಸ್ ದಾಖಲಿಸಿಕೊಳ್ಳಲು ನಿರಾಕರಿಸಿ, ಜವಾನನ ಮೇಲೆ ‘ಚುಡಾಯಿಸಿದ’ನೆಂದು ದೂರು ಬರೆಯುವಂತೆ ಸೂಚಿಸಿದ್ದರು. ಪೋಷಕರ ಸತತ ಒತ್ತಾಯದ ನಂತರವಷ್ಟೇ ಅತ್ಯಾಚಾರ ಪ್ರಕರಣ ದಾಖಲಿಸಲಾಯ್ತು. ಅಷ್ಟಾದರೂ ಶನಿವಾರ ರಾತ್ರಿಯವರೆಗೆ ಆರೋಪಿಯನ್ನು ಬಂಧಿಸಿರಲಿಲ್ಲ. ಪೋಷಕರು ಹಾಗೂ ಸಮುದಾಯದ ಒತ್ತಡ ಮತ್ತು ರಾಜಕಾರಣಿಗಳ ಮಧ್ಯಪ್ರವೇಶದಿಂದಾಗಿ ಕೊನೆಗೂ ಆರೋಪಿಯ ಬಂಧನವಾಗಿದೆ.  

    ಮಂತ್ ತಾಲ್ಲೂಕಿನ ವಿಧಾನಸಭಾ ಸದಸ್ಯ ಶ್ಯಾಮ ಸುಂದರ ಶರ್ಮ ಬಾಲಕಿ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

     

    ಇತ್ತ ಬುಲಂದ್ ಶೆಹರ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಆರೋಪಿಗಳ ಬಂಧನವಾಗಿರುವ ಸುದ್ದಿ ಬಂದಿದೆ. ಅದೇನಿದ್ದರೂ, ಎಲ್ಲಿಯವರೆಗೆ ಈ ದುಷ್ಕೃತ್ಯಕ್ಕೆ ಕಠಿಣ ಶಿಕ್ಷೆ ಜಾರಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ಪಿಡುಗನ್ನು ತಹಬಂದಿಗೆ ತರುವುದು ಕಷ್ಟ ಅನ್ನುವ ಮಾತುಗಳು ಕೇಳಿಬರುತ್ತಿವೆ.

     

     

    Tags:

    ರೇಪ್

    ಅತ್ಯಾಚಾರ

    ಕಠಿಣ ಶಿಕ್ಷೆ

    ಅತ್ಯಾಚಾರಿ

    Please reload

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    ಜನ್ಮದಿನ : ಒಂದು ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ

    ರಾಜಕೀಯ ನಿಲುವು ವ್ಯಕ್ತಪಡಿಸಿದ ಯುವತಿಗೆ ಜಾತಿನಿಂದನೆ; ಇದಕ್ಕೆ ಕೊನೆ ಇಲ್ಲವೆ?

    ಬಿಜೆಪಿ ಹೇಳುವ 'ಉದ್ದೇಶಪೂರ್ವಕ ಸುಳ್ಳು'ಗಳು

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    1/10
    Please reload

    ಮೂರು ಸಚ್ಚಿದಾನಂದನ್ ಪದ್ಯಗಳು; ಸುನೈಫ್ ಅನುವಾದದಲ್ಲಿ

    May 5, 2019

    ಇಸ್ಲಾಂ : ಧರ್ಮದೊಳಗೆ ಸೈದ್ಧಾಂತಿಕ ಸಂಘರ್ಷ ನಡೆಯಬೇಕಿದೆ...

    May 3, 2019

    ಕ್ರಾಂತದರ್ಶಿತ್ವ ಕೋಮು ಉದ್ವಿಗ್ನತೆಯ ಮನಸ್ಥಿತಿಗೆ ಮದ್ದಾಗಬಲ್ಲದು

    May 1, 2019

    ಅಮ್ಮ : ವೈಕ್ಕಂ ಕಥೆ, ಸುನೈಫ್ ಅನುವಾದದಲ್ಲಿ....

    May 1, 2019

    ದುಡಿಯುವ ಜನರ ಐಕ್ಯತೆಯೇ ಕೋಮುವಾದಕ್ಕೆ ಸೂಕ್ತ ಮದ್ದು : ಭಗತ್ ಸಿಂಗ್ ಲೇಖನದ ಅನುವಾದ

    May 1, 2019

    ಚುನಾವಣೆ, ಅಭಿಪ್ರಾಯ ಉತ್ಪಾದನೆ ಮತ್ತು ಮಾರುಕಟ್ಟೆ : ಕನ್ಹಯ್ಯ ಕುಮಾರ್

    March 27, 2019

    ಧರ್ಮ, ರಾಷ್ಟ್ರ ಮತ್ತು ಸಾಮಾಜಿಕ ಕ್ರಾಂತಿ ವಿಷಯಗಳಲ್ಲಿ ಭಗತ್ ಸಿಂಗ್ ಮೇಲೆ ಯಾರ ಚಿಂತನೆಗಳ ಪ್ರಭಾವವಿತ್ತು?

    March 22, 2019

    ಬಾಜಿ : ಆಂಟನ್ ಚೆಕೋವ್ ಕಥೆ, ಪುನೀತ್ ಅಪ್ಪು ಅನುವಾದದಲ್ಲಿ...

    March 22, 2019

    ಕ್ರಾಂತಿ, ಅಧಿಕಾರ ಮತ್ತು ಪ್ರಜಾಪ್ರಭುತ್ವ ಕುರಿತು ಭಗತ್ ಸಿಂಗ್ ಮೇಲೆ ಪ್ರಭಾವ ಬೀರಿದ ಚಿಂತನೆಗಳು ಯಾವುವು ಗೊತ್ತೆ?

    March 20, 2019

    ಅಸ್ಪೃಶ್ಯತೆಯ ಸಮಸ್ಯೆ: ಭಗತ್ ಸಿಂಗನ ‘ವಿದ್ರೋಹಿ’ ಬರಹ : ಭಾಗ ~ 2

    March 19, 2019

    Please reload

    Share